ಬದುಕು ಬಲು ಭಾರ
ಹಾದಿಯೂ ಅತಿ ದೂರ
ಮುಗಿಯದ ಪಯಣ
ಎಲ್ಲಿಂದ ಎತ್ತಣ.
ಸಾಗುತಿದೆ ಬದುಕು ಭಯ
ಆತಂಕಗಳ ಸಂಕೋಲೆ
ಉದಯಿಸುವ ಸೂರ್ಯನೊಂದಿಗೆ
ನೂರಾರು ಚಿಂತೆ ಬೇಗೆ
ಪರಿಭ್ರಮಿಸುತ್ತಿದೆ ಮನ
ಗರ ಗರ ಸುತ್ತುವ ಹದ್ದಿನಂತೆ
ಕ್ಷಣ ಚಿತ್ತ ಕ್ಷಣ ಪಿತ್ತ.
ಭೀತಿ ಭೀಕರತೆಯ ಸೆಳೆತ
ಹುಚ್ಚು ಕುದುರೆಯ ನಾಗಾಲೋಟ
ಕಾಣದು ಮುಕ್ತಿಯ ತೀರ
ಗುರಿ ಸೇರಲು ಕಾತುರ
ನೂರಾರು ಸಮಸ್ಯೆಗಳ ಸಾಗರ
ಜೊತೆಗೆ ಬಂದವರೆಲ್ಲಾ
ಸಾಗಿದರು ಬಲು ದೂರ
ಹಲ್ಲು ಕಚ್ಚಿ ಮುಷ್ಠಿ ಬಿಗಿದು
ಈಸಬೇಕು
ಇದ್ದು ಜೈಸಬೇಕು.
*****
Related Post
ಸಣ್ಣ ಕತೆ
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…